Saturday, June 20, 2009

ಬ್ಲಾಗ್ ಬಗ್ಗೆ

ಕಾರಣಾಂತರಗಳಿಂದ ಈ ಬ್ಲಾಗ್ ನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಇದರ ಮುಂದುವರಿದ ಭಾಗವಾಗಿ
http://makrumanju.blogspot.com
ನಲ್ಲಿ ನೋಡಬಹುದು.

ಧನ್ಯವಾದಗಳು.
ಮಂಜು.ಎಂ.ಕೆ

Saturday, January 24, 2009

ಮನದ ವೇದನೆ - ನನ್ನ ಕವನ


ರಾಜಕೀಯ - ನನ್ನ ಕವನ


ಅಂದಗಾತಿ - ನನ್ನ ಕವನ


ನೇತಾಜಿ - ನನ್ನ ಕವನ


Thursday, November 13, 2008

ನಿನ್ನಯ ಗುರುತು - ನನ್ನ ಕವನ

ನನ್ನ ಎದೆಯಲಿ ಮೂಡಿದ ನೆನೆಪು
ನಿನ್ನ ಒಲವಿನ ಗುರುತು ಕಣೇ
ಗಗನದಿ ಮಿನುಗುವ ಚುಕ್ಕಿಯು ಕೂಡ
ನಿನ್ನ ಕಂಗಳ ಪ್ರತಿಬಿಂಬ ಕಣೇ


ಅರಳಿದ ತಾವರೆ ಎಲೆಗಳ ಮೇಲೆ
ನಾಟ್ಯವಾಡುವ ಪುಟ್ಟ ಇಬ್ಬನಿಯೇ
ದುಂಬಿಯ ರಂಜಿಸಿ ಗಮಗಮ ಎನ್ನುವ
ಹೂವಿನ ಪರಿಮಳ ಮಕರಂದವು ನೀ


ನಿನ್ನ ಹೃದಯದಿ ನೆಲೆಸಿರುವ
ನನ್ನ ಮನಸ್ಸನ್ನು ನಾ ಕಂಡೆ ಕಣೇ

-ಮಾ.ಕೃ.ಮಂಜು

Saturday, November 1, 2008

ಕನಸ್ಸು - ನನ್ನ ಕವನ

ಕನಸ್ಸು
ಕನಸ್ಸಲ್ಲಿ ಬರುವವಳು
ಸದಾ ನನ್ನ ಕಾಡುತಿಹಳು
ಪ್ರೀತಿಯ ಕೊಟ್ಟವಳು
ಹೃದಯದಿ ನೆಲೆಸಿಹಳು
*********************
ನನ್ನವಳು ನನಗೆಲ್ಲಾ
ಪ್ರೀತಿಯ ತೊರೆದಿಲ್ಲ
ನೆನಪನ್ನು ಮರೆತಿಲ್ಲ
ಕನಸ್ಸಾಗಿ ಉಳಿದಳಲ್ಲ
**********************
ನನ್ನ ಮೇಲೆ ತೋರದಿರು ಕೋಪ
ಸಹಿಸಲಾರೇ ಅದರ ತಾಪ
ಬಿಟ್ಟುಬಿಡು ಈ ನಿನ್ನ ಮುಂಗೋಪ
ಮಾಡುತ್ತಿರುವೇ ಸದಾ ನಿನ್ನದೇ ಜಪ
**ಮಾ.ಕೃ.ಮಂಜು**

ಹಲ್ಮಿಡಿ ಶಾಸನ


ಕನ್ನಡದ ಮೊಟ್ಟ ಮೊದಲ ಶಾಸನ ಈ ಹಲ್ಮಿಡಿ ಶಾಸನ. ಕ್ರಿ.ಶ. ೪೫೦ ರ ಸುಮಾರಿನಲ್ಲಿ ಕದಂಬರ ಕಾಕುತ್ಸ್ಥವರ್ಮನ ಕಾಲದಲ್ಲಿ ರಚಿತವಾದ ಈ ಶಾಸನವಾಗಿದೆ. ಕರ್ನಾಟಕದ ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ದೊರೆತಿರುವುದರಿಂದ ಇದನ್ನು ಹಲ್ಮ್ಡಿಡಿ ಶಾಸನ ಎನ್ನುತ್ತಾರೆ.

Friday, October 31, 2008

ಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ಕನ್ನಡದ ಹಬ್ಬವು ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಿರದೇ ಸದಾ ಕಾಲ ಕನ್ನಡದ ಕಂಪು ತುಂಬಿರಲಿ ಎಂದು ಹಾರೈಸುತ್ತೇನೆ. ಈ ದಿನ ಕನ್ನಡಿಗರು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಸಪ್ತ ಜ್ಞಾನಪೀಠ ಪಡೆದ ಏಕೈಕ ಭಾಷೆಗೆ ಈಗ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಗರಿ ಸೇರಿದೆ. ಕಸ್ತೂರಿ ಕನ್ನಡ ವಿಶ್ವ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ೫೩ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಜೈ ಕರ್ನಾಟಕ ಮಾತೆ................ ಜೈ ಕನ್ನಡ........

ಅಳಿಯದ ನೆನಪು - ನನ್ನ ಕವನ

ಹೃದಯದಿ ಮೂಡಿದ ಭಾವನೆಗಳು

ಅವುಗಳೇ ನಿನ್ನಯ ನೆನಪುಗಳು

ನೆನಪಿನ ಪುಟಗಳ ಅಂಚಿನಲಿ

ಮೂಡಿದೆ ಸುಂದರ ಕನಸುಗಳು


ಸಾವಿರ ಕನಸ್ಸಿನ ಹಾಳೆಯಲಿ

ಜಾರಿ ಹೋಗದಿರಲಿ ನಿನ್ನ ಮಾತುಗಳು

ಯಾವ ಮೋಡಿಯಲಿ ನೀ ಸಿಲುಕಿರುವೆಯೋ

ನನ್ನ ಮನಸ್ಸ ನೀ ಮರೆತಿರುವೆ


ಗುಡುಗು ಸಿಡಿಲು ಬಂದರೂ ಸರಿಯೇ

ನಿನ್ನ ನೆನಪು ಅಳಿಯುವುದೇ?

ಲೋಕದ ಸೃಷ್ಟಿಗೆ ದೇವರ ಕೃಪೆಯು

ನನ್ನ ಕವನಕ್ಕೆ ನೀ ಸ್ಪೂರ್ತಿಯು

-ಮಾಕೃಮ

ಮೌಲ್ಯ - ನನ್ನ ಕವನ

ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ,

ನೀ ಇಲ್ಲದ ನನ್ನ ಬಾಳು

ಪಲ್ಲವಿ ಇಲ್ಲದ ಚರಣದಂತೆ

ಚಂದ್ರನಿಲ್ಲದ ಭೂಮಿಯಂತೆ

ಉಸಿರಿಲ್ಲದ ದೇಹದಂತೆ

ಎಂದು ವರ್ಣಿಸಿದರೆ,


ಆ ಪ್ರಿಯತಮೆ ಈತನಿಗೆ,

ನೀ ಇಲ್ಲದ ನನ್ನ ಬಾಳು

ಹಣವಿಲ್ಲದ ಕಿಸೆಯಂತೆ

ಬ್ಯಾಲೆನ್ಸ್ ಇಲ್ಲದ ಎ.ಟಿ.ಎಮ್ ಕಾರ್ಡ್ ನಂತೆ

ಕರೆನ್ಸಿ ಇಲ್ಲದ ಮೊಬೈಲ್ ನಂತೆಎನ್ನುತ್ತಾಳೆ,.

-ಮಾಕೃಮ-

ಭಾವನೆಯ ಹಕ್ಕಿ - ನನ್ನ ಕವನ

ಭಾವನೆಯ ಹಕ್ಕಿ

ಭಾವನೆಯ ಹಕ್ಕಿಯು ಹಾಡುತ್ತಿದೆ

ಮನಸ್ಸಿನ ಮಾತನು ಹೇಳುತ್ತಿದೆ

ಬದುಕಿನ ಸುಂದರ ಪುಟಗಳಲ್ಲಿ

ಕನಸ್ಸಿನ ಸಾವಿರ ಪುಟಗಳನು


ಕಲ್ಲು - ಮುಳ್ಳಿನ ಬಾಳಿಗೆ

ಪ್ರೀತಿ ಮಮತೆಯ ಆಶ್ರಯವು

ನೋವು ನಲಿವುಗಳ ಬಡಿತಕೆ

ತಾಳ್ಮೆ ಬಾಳಿನ ಜೊತೆಗೆರಲಿ


ಮನಸಿನ ದುಃಖವ ನುಂಗಿ

ನಗುವಿನ ದೀಪವ ಹಚ್ಚಿದೆ

ಯಾರು ಕಾಣದ ಅಂತರಂಗದಿ

ಮೌನದ ಮಾತುಗಳು ಹೊರಡುತ್ತಿವೆ

-ಮಾಕೃಮ-

ಹೆಣ್ಣು - ನನ್ನ ಕವನ

ಹೆಣ್ಣಿನ ಮಾಯಾ ಮೋಹಕ್ಕೆ

ಸಿಲುಕದವರಿಲ್ಲ ಜಗತ್ತಿನಲ್ಲಿ

ಆದಿಯ ಸೃಷ್ಟಿಕರ್ತಳು ಇವಳು

ಅಂತ್ಯದ ರೂವಾರಿಯು ಆಗಬಲ್ಲಳು


ರಾಜ ಮಹಾರಾಜರು ಇವಳಿಗಾಗಿ

ಹರಿಸಿದರು ರಕ್ತದ ಕೋಡಿ

ಆದರೂ ಯಾರಿಗೂ ತಿಳಿಯುತ್ತಿಲ್ಲ

ಇವಳ ಮನಸ್ಸಿನ ಮರ್ಮದ ಮೋಡಿ


ರಾಜ್ಯ ಕಟ್ಟಲು ಇವಳೇ ಸ್ಪೂರ್ತಿ

ರಾಜ್ಯ ನಿರ್ನಾಮಕ್ಕೂ ಇವಳೇ ಕುತಂತ್ರಿ

ಏನೇ ಇದ್ದರೂ ಬದುಕಿನಲ್ಲಿ

ಇವಳದೇ ಕಾರುಬಾರು.

-ಮಾಕೃಮ-

ನಮ್ಮ ಕನ್ನಡ ನಾಡು - ನನ್ನ ಕವನ

ನಮ್ಮ ಕನ್ನಡ ನಾಡು
ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ*

ಅಮೃತ ಮುತ್ತು - ನನ್ನ ಕವನ

ಅಮೃತ ಮುತ್ತು
ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ
ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ
ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು
-ಮಾ.ಕೃ.ಮ*

ಅನಾಥ ಮಗುವಾದೆ ನಾನು - ಹೊಸ ಜೀವನ

ನನ್ನನ್ನು ಸದಾ ಕಾಡುತ್ತಿರುವ ಗೀತೆ.

[ಹೆಣ್ಣು]ಉಳ್. ಳ್ ಳ್ ಳ್... ಆಯಿ ಆಯಿ.....
ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ....
[ಗಂಡು]ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು
ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಕೇಳೋ ದೇವನೇ 1
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಹೇಳೋ ದೇವನೇ ೨
ಸಾಹಿತ್ಯ ಮತ್ತು ಸಂಗೀತ : ಹಂಸಲೇಖಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್

ನನ್ನ ಹಳ್ಳಿ - ನನ್ನ ಕವನ

ನನ್ನ ಹಳ್ಳಿ

ಹಳ್ಳಿಯ ಸೌಂದರ್ಯ ಸೊಬಗು

ಹಚ್ಚ ಹಸಿರಿನ ಕಾಂತಿಯ ಮೆರಗು

ದಟ್ಟವಾದ ಮರಗಳ ಸಾಲು

ಪ್ರಕೃತಿಯ ಉಳಿವಿಗೆ ಇದರ ಸವಾಲು


ತಣ್ಣನೆಯ ಗಾಳಿಯ ತಂಪು

ಸೊಗಸಾದ ಹಕ್ಕಿಯ ಧ್ವನಿಯ ಇಂಪು

ಸತ್ಯ ನಿಷ್ಟತೆಗೆ ಹೆಸರಾದ ಜನ

ಮೋಸವರಿಯದ ಮುಗ್ಧ ಜನ


ಅಜ್ಜಿಯು ಹೇಳುವ ಚೆಂದದ ಕಥೆ

ಮಾಸಿಹೋದ ನೆನಪುಗಳ ವ್ಯಥೆ

ಜನರಾಡುವ ಕಸ್ತೂರಿ ಕನ್ನಡ

ಕೇಳಲು ನಿಂತರೆ ಮಹಾದಾನಂದ


ಉಳಿದಿದೆ ಸಂಸ್ಕೃತಿಯ ಬೇರು

ಸರ್ವರೂ ಒಂದಾಗಿ ಬಾಳುವ ಊರು

ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ

ಸೌಂದರ್ಯ ಸಾರುವ ಶಾಂತಿಧಾಮದಲಿ

-* ಮಾ.ಕೃ.ಮ*

ರಂಗಿನ ಚಿಟ್ಟೆ - ನನ್ನ ಕವನ

ರಂಗಿನ ಚಿಟ್ಟೆ
ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ
ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ
ಬಣ್ಣ ಬಣ್ಣದ ರೆಕ್ಕೆಯ ಜೋಡಿಸಿದೆ
ಸುಂದರ ಪ್ರಪಂಚವ ಸೃಷ್ಟಿಸಿದೆ
ಪ್ರೀತಿಯ ಅಂಕುರವ ಅದಕ್ಕಿಟ್ಟಿದ್ದೆ

ಇದು ಮನಸ್ಸಿನ ಮಾಯಾಲೋಕ
ರಮಣೀಯವಾಗಿರುವ ಪ್ರೇಮಲೋಕ
ಕನಸ್ಸುಗಳ ಸೃಷ್ಟಿಯ ಬ್ರಹ್ಮ ಲೋಕ
ಊಹೆಗೂ ಮೀರಿದ ಕಲ್ಪನಾಲೋಕ

ಹುಡುಕುತ್ತಿರುವೆ ಈ ಪ್ರೀತಿಯ ಮೂಲವೆಲ್ಲಿ
ಕರಗಿಹೋದ ಸುಂದರ ಕ್ಷಣಗಳಲ್ಲಿ
ಅದ್ಭುತವೆನ್ನುವ ಕಿನ್ನರಲೋಕದಲ್ಲಿ
ಮರೆಯಾದ ಕಲ್ಪನಾ ಸಾಮ್ರಾಜ್ಯದಲ್ಲಿ

ಪ್ರೀತಿ-ಪ್ರೇಮವೇ ಲೋಕದ ಸೃಷ್ಟಿಗೆ ಮೂಲ
ಮತ್ತೆ ಸಿಗದು ಕಳೆದುಹೋದ ಕಾಲ
ಭೇದಿಸಲಾಗದು ಪ್ರೀತಿಯ ಮಾಯಾಜಾಲ
ನಿಗೂಢವಾಗಿಯೇ ಉಳಿದಿದೆ ಈ ಇಂದ್ರಜಾಲ
-.ಮಾ.ಕೃ.ಮ

ಓ ನನ್ನ ಜೀವವೇ -ನನ್ನ ಕವನ

ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ

ಎನೋ ಕಳೆದುಹೋದ ಅನುಭವ

ಎದೆಯಲಿ ಪ್ರೀತಿಯ ಕಂಪನ

ಸದಾ ಜಿನುಗುವ ಸಿಂಚನ


ಸದಾ ಕಾಡುತ್ತಿದೆ ನಿನ್ನ ನೆನಪು

ಮಾಸಿಹೋದ ನೆನಪುಗಳ ಇಂಪು

ನಾ ಹುಡುಕುತ್ತಿರುವೆ ಆನಂದ

ದುಃಖವಿರದ ಸುಖದಲ್ಲಿಂದ


ಮನವು ಹಕ್ಕಿಯಂತೆ ಹಾರುತಿರಲಿ

ಅಂತ್ಯವಿರದ ಪ್ರೀತಿಯ ದಿಗಂತದಲಿ

ನವಿಲಿನಂತೆ ನಲಿಯುತ್ತಿದೆ ಮನಸ್ಸು

ನನಸ್ಸಾಗುವುದೇ ನನ್ನ ಕನಸ್ಸು


ಸದಾ ಮಾಡುತ್ತಿರುವೆ ನಿನ್ನ ಮನನ

ನೀ ಕೃಪೆ ತೋರಿದರೆ ನಾ ಪಾವನ

ನಾ ಬೆದರುವೆ ನನ್ನ ಆತ್ಮಕ್ಕೆ

ಧೈರ್ಯ ಕಳೆದುಹೋದ ಈ ಕ್ಷಣಕ್ಕೆ


ಮನದಲ್ಲಿ ಹುಟ್ಟಿತು ಈ ಕವನ

ನಾ ಮಾಡಲೇನು ಇದರ ವಾಚನ

- *ಮಾ.ಕೃ.ಮಂಜು*